ಶಿಕಾರಿಪುರ ಲೈವ್:
ಸಂತ ಸೇವಾಲಾಲ್ ಮಹಾರಾಜರು ಸರಿಸಮಾನತೆಯ ಬದುಕಿಗೆ ದಾರಿ ತೋರಿಸಿದ್ದರು ಎಂದು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ.ರವಿ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ತಾಲೂಕು ಆಡಳಿತ ಹಾಗೂ ತಾಲೂಕು ಬಂಜಾರ ಸಮಾಜ ಆಯೋಜಿಸಿದ್ದ ಸಂತ ಸೇವಾಲಾಲ್ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಂಜಾರ ಸಮಾಜ ಹರಪ್ಪ ಸಂಸ್ಕೃತಿಯಷ್ಟು ಐತಿಹಾಸಿಕ ಹಿನ್ನೆಲೆ ಹೊಂದಿದೆ. ಬಂಜಾರ ಸಮಾಜ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದು,ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿತ್ರು. ಗೆರಿಲ್ಲಾ ಯುದ್ದ ತಂತ್ರಗಾರಿಕೆಯಲ್ಲಿ ಬಂಜಾರ ಸಮಾಜದ ಪಾತ್ರವಿದೆ. ಬಂಜಾರ ಸಮುದಾಯದ ಸಂತಸೇವಾಲಾಲ್ ಸಾಮಾನ್ಯ ವ್ಯಕ್ತಿ ಯಾಗಿರಲಿಲ್ಲ ಅವರು ನಾಯಕರಾಗಿದ್ದರು. ಬ್ರಿಟೀಷರ ವಿರುದ್ದ ಹೋರಾಟ ನಡೆಸಿದ್ದರು. ಸೇವಾಲಾಲ್ ಅವತಾರ ಪುರುಷರಾಗಿದ್ದರು. ಸಮಾಜದ ಜನರಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಿದ್ದರು ಎಂದು ಶ್ಲಾಘಿಸಿದ ಆವರು, ಬಂಜಾರ ಸಮಾಜ ಬಾಂಧವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ಭದ್ರಾವತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಎನ್. ಕುಮಾರ್ ಮಾತನಾಡಿ,
ಸಂತ ಸೇವಲಾಲ್ ಮಹಾನ್ ದಾರ್ಶನಿಕರಾಗಿದ್ದರು. ಅವರ ಆದರ್ಶ ತತ್ವಗಳನ್ನು ನಾವೆಲ್ಲಾ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಾಲ್ಲೂಕು ಪಂಚಾಯಿತಿ ಇಒ ನಾಗರಾಜ್, ತಾಲ್ಲೂಕು ಬಂಜಾರ ಸಮಾಜ ಅಧ್ಯಕ್ಷ ಕುಮಾರನಾಯ್ಕ ಮರಡಿ ತಾಂಡ, ಮಹಮಠ ಸಮಿತಿ ನಿರ್ದೇಶಕ ವಿಜಯನಾಯ್ಕ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಗಾರಿನಾಯ್ಕ, ಮುಖಂಡ ಬಸವರಾಜನಾಯ್ಕ, ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಗ್ರಾಮಗಳ ಬಂಜಾರ ಸಮಾಜದ ಮುಖಂಡರು ಉಪಸ್ಥಿತರಿದ್ದರು.
Leave a comment