Home ಪ್ರಮುಖ ಸುದ್ದಿ ಅಹಿಂದ ವರ್ಗದ ಮುಖಂಡರನ್ನು ರಾಜಕೀಯ ಪಕ್ಷಗಳು ನಿರ್ಲಕ್ಷಿಸಿವೆ
ಪ್ರಮುಖ ಸುದ್ದಿ

ಅಹಿಂದ ವರ್ಗದ ಮುಖಂಡರನ್ನು ರಾಜಕೀಯ ಪಕ್ಷಗಳು ನಿರ್ಲಕ್ಷಿಸಿವೆ

Share
Share

ಶಿಕಾರಿಪುರ ಲೈವ್:
ತಾಲ್ಲೂಕಿನಲ್ಲಿ ಅಹಿಂದ ವರ್ಗದ ಮುಖಂಡರನ್ನು ರಾಜಕೀಯ ಪಕ್ಷಗಳು ನಿರ್ಲಕ್ಷಿಸಿದ್ದು,ಅಹಿಂದ ವರ್ಗದವರನ್ನು ಸಂಘಟಿಸಲು ಅಹಿಂದ ಸಂಘಟನೆಯನ್ನು ಸದೃಢಗೊಳಿಸಲು ಮುಂದಾಗಿದ್ದೇವೆ ಎಂದು ಅಹಿಂದ ಸಂಘಟನೆ ತಾಲ್ಲೂಕು ಅಧ್ಯಕ್ಷ ಕಾಗಿನಲ್ಲಿ ರಂಗಪ್ಪ ಹೇಳಿದರು.

ಪಟ್ಟಣದ ಸುದ್ದಿ ಮನೆಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆವರು, ಕೆಲವು ರಾಜಕೀಯ ಪಕ್ಷಗಳ ಮುಖಂಡರು ಚುನಾವಣೆ ಸಂದರ್ಭದಲ್ಲಿ ಮಾತ್ರ ಅಹಿಂದ ವರ್ಗದ ಜನರನ್ನು ಬಳಕೆ ಮಾಡಿಕೊಳ್ಳುತ್ತಾರೆ. ಆದರೆ ಚುನಾವಣೆ ನಂತರ ಅಹಿಂದ ವರ್ಗಕ್ಜೆ ರಾಜಕೀಯ ಸ್ಥಾನಮಾನಗಳನ್ಬು ನೀಡದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಅಹಿಂದ ವರ್ಗವನ್ನು ಜಾಗೃತಗೊಳಿಸಲು ಪಟ್ಟಣದ ಅಂಚೆಕಚೇರಿ ಸಮೀಪದ ಪೌರವಿಹಾರದ ವಾಣಿಜ್ಯ ಸಂಕೀರ್ಣದಲ್ಲಿ ಫೆಬ್ರವರಿ 11ರಂದು ಅಹಿಂದ ಕಚೇರಿಯನ್ನು ಆರಂಭಿಸಲಾಗುತ್ತದೆ. ಮುಂಬರುವ ಚುನಾವಣೆಗಳಲ್ಲಿ ನಮ್ಮ ಸಂಘಟನೆ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸಲಾಗುವುದು ಎಂದರು.

ಕರ್ನಟಕ ದಲಿತ ಸಂಘರ್ಷ ಸಮಿತಿ ಸಂಚಾಲಕ ಚುರ್ಚಿಗುಂಡಿ ಜಗದೀಶ್ ಮಾತನಾಡಿ, ತಾಲೂಕಿನಲ್ಲಿ ಅಹಿಂದ ವರ್ಗದ ಜನರು ಶೈಕ್ಷಣಿಕ,ಆರ್ಥಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ. ಅಹಿಂದ ವರ್ಗದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ನಮ್ಮ ಅಹಿಂದ ಸಂಘಟನೆ ಮಾಡಲಿದೆ ಎಂದರು.

ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಹಾಗೂ ಅಹಿಂದ ಮುಖಂಡ ಭಂಡಾರಿ ಮಾಲತೇಶ್ ಮಾತನಾಡಿ,
ತಾಲೂಕಿನಲ್ಲಿ ರಾಜಕೀಯ ಪಕ್ಷಗಳಲ್ಲಿ ಅಹಿಂದ ಮುಖಂಡರು ಹಾಕುವ ಶ್ರಮಕ್ಕೆ ಗೌರವ ಹಾಗೂ ಸೂಕ್ತ ಪ್ರತಿಫಲ ಸಿಗುತ್ತಿಲ್ಲ. ಆದ್ದರಿಂದ ಪಕ್ಷಾತೀತವಾಗಿ ಅಹಿಂದ ಸಂಘಟನೆ ಆರಂಭಿಸಿದ್ದೇವೆ ಎಂದರು.

ಮುಖಂಡರಾದ ತಿಮ್ಲಾಪುರ ಹುಚ್ಚರಾಯಪ್ಪ,
ನಗರದ ಮಾಲತೇಶ್, ಹನುಮಂತಪ್ಪ ಕಡೇನಂದಿಹಳ್ಳಿ, ಕುಮಾರನಾಯ್ಕ ಗೊದ್ದನಕೊಪ್ಪ, ಕೊಟ್ಟ ಹಾಲೇಶ್, ಮುಷೀರ್ ಅಹಮದ್, ಮಂಜನಾಯ್ಕ ಗೊಗ್ಗ, ಸಚಿನ್ ಅರಷಿಣಗೆರೆ ಮತ್ತಿತರರು‌ ಉಪಸ್ಥಿತರಿದ್ದರು.

 

Share

Leave a comment

Leave a Reply

Your email address will not be published. Required fields are marked *

Related Articles
ಪ್ರಮುಖ ಸುದ್ದಿ

ಸಂಭ್ರಮದಿಂದ ಹೋಳಿಹಬ್ಬ ಆಚರಿಸಿದ ಯುವ ಸಮೂಹ

ಶಿಕಾರಿಪುರ ಲೈವ್: ಪರಸ್ಪರ ಬಣ್ಣ ಹಚ್ಚುವ ಮೂಲಕ ಪಟ್ಟಣದ ಜನತೆ ಹೋಳಿ ಹಬ್ಬವನ್ನು ಶುಕ್ರವಾರ ಸಡಗರ...

Homeಪ್ರಮುಖ ಸುದ್ದಿ

ಸಮಾಜಕ್ಕಾಗಿ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಿ: ಮಾಳವಿಕಾ ಅವಿನಾಶ್ ಸಲಹೆ

ಶಿಕಾರಿಪುರ ಲೈವ್: ಮಹಿಳೆಯರು ಸಮಾಜ ಮುಖಿಯಾಗಿ ಕೆಲಸ ಮಾಡುವ ಮೂಲಕ ಸಮಾಜಕ್ಕಾಗಿ ಕೊಡುಗೆ ನೀಡುವ ಮನೋಭಾವ...

ಪ್ರಮುಖ ಸುದ್ದಿ

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜನ್ಮದಿನ ಪ್ರಯುಕ್ತ ಹೋಮ ಹವನ- ರಕ್ತದಾನ ಶಿಬಿರ

ಶಿಕಾರಿಪುರ ಲೈವ್: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜನ್ಮದಿನದ ಪ್ರಯುಕ್ತ ಪಟ್ಟ‌ಣದಲ್ಲಿ ಬಿಜೆಪಿ ಮುಖಂಡರು ಹಾಗೂ...

ಪ್ರಮುಖ ಸುದ್ದಿ

ಮಹಾಶಿವರಾತ್ರಿ ಮನೊರಂಜನೆಯ ಹಬ್ಬವಲ್ಲ ಶಿವನ ಧ್ಯಾನಿಸುವ ಹಬ್ಬ: ಸಂಸದ ಬಿ.ವೈ. ರಾಘವೇಂದ್ರ

ಶಿಕಾರಿಪುರ ಲೈವ್: ಮಹಾಶಿವರಾತ್ರಿ ಮನೊರಂಜನೆಯ ಹಬ್ಬವಲ್ಲ, ಶಿವನನ್ನು ಧ್ಯಾನ ಮಾಡುವ ಹಬ್ಬವಾಗಿದೆ ಎಂದು ಸಂಸದ ಬಿ.ವೈ....